Search This Blog

Thursday, May 26, 2011

(ಅ) ನೈತಿಕ

ಯಾವುದೇ ಒಂದು ಜನಾಂಗ ಅಥವಾ ನಾಗರಿಕತೆ ಬೆಳೆಯ ಬೇಕೆಂದರೆ ಸಂತಾನೋತ್ಪತ್ತಿ ಅತೀ ಮಹತ್ವ ಹಾಗೂ ಅವಶ್ಯಕವಾದ ಅಂಶವಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಣು ಗಂಡಿನ ನಡುವೆ ನೈಸರ್ಗಿಕವಾಗಿ ನಡೆಯುವ ಸಂಮ್ಮಿಲನ (ಸೆಕ್ಸ) ಕ್ರೀಯೆಗೆ ಅತೀ ಪ್ರಾಮುಖ್ಯತೆ ಕೊಡಲಾಗಿದೆ. ಗಂಡು ಮೊದಲು ಅಥವಾ ಹೆಣ್ಣು ಮೊದಲು ಎಂಬ ಪ್ರಶ್ನೆಗೆ ಉತ್ತರ ಇನ್ನೂವರೆಗೂ ಸಿಕ್ಕಲ್ಲ. ಅದೇನೆ ಇರಲಿ ಸಧ್ಯ ಮಾನವ ಜನಾಂಗ ಇಲ್ಲಿಯವರೆಗೂ ಮುಟ್ಟಿರುವುದಕ್ಕೆ ಮೊದಲು ಹುಟ್ಟಿದ ಆ ಗಂಡು ಹೆಣ್ಣಿಗೂ ಹಾಗೂ ಅವರ ಸಂಭೋಗದಿಂದ ಜನ್ಮ ತಳೆದ ಮೊದಲ ಮಗುವಿಗೂ ಒಂದು ಸಲಾಮ್ ಹೇಳೋಣ.
ಪ್ರತಿಯೊಂದು ಜನಾಂಗ ಬೆಳೆಯುತ್ತಾ ಬೆಳೆಯುತ್ತಾ ತನ್ನದೇ ಆದ ಸಂಪ್ರದಾಯವನ್ನು ಅಳವಡಿಸಿಕೊಳ್ಳುತ್ತದೆ. ಜನಾಂಗದಿಂದ ಜನಾಂಗಕ್ಕೆ ಸಂಪ್ರದಾಯಗಳು ಬಿನ್ನವಾಗುತ್ತ ಹೋಗುತ್ತವೆ. ಹಾಗೆ ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಕೆಲವು ನಿಯಮಗಳು ಕಟ್ಟಳೆಗೆ ಒಳಪಟ್ಟರೆ ಕ್ರೈಸ್ತ್, ಮುಸ್ಲಿಂ, ಸಿಖ್, ಜೈನ್ . . . ಹೀಗೆ ಬೇರೆ ಬೇರೆ ಜನಾಂಗಳಲ್ಲಿ ಆ ನಿಯಮಗಳಿಗೆ ಮಣ್ಣನೆ ದೊರೆತಿರಬಹದು. ಇನ್ನೂ ಕೆಲವೊಂದು ಸಂಪ್ರದಾಯಗಳು ಅವರಲ್ಲಿ ತಿರಸ್ಕಾರಕ್ಕೊಳಪಟ್ಟರೆ ಅಂತವುಗಳು ನಮ್ಮಲ್ಲಿ ಪುರಸ್ಕಾರಕ್ಕೆ ಒಳಗಾಗಿರಬಹದು. ಉದಾ : ಮುಸ್ಲಿಂ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಮೂಖಕ್ಕೆ ಬುರಖಾ ಹಾಕಿಕೊಳ್ಳುವುದು, ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ ಪ್ರವೇಶ ಇಲ್ಲದಿರುವುದು. ಹಾಗೆ ಹಣೆಯಲ್ಲಿ ಕುಂಕುಮ, ನಾಮ, ತಿಲಕ ವಿಟ್ಟುಕೊಳ್ಳುವುದು, ಸಿಖ್ ರು ಮೂಖದಲ್ಲಿ ಮೀಸೆ, ಗಡ್ಡ ಬಿಟ್ಟು, ತೆಲೆಗೆ ಪೇಟಾ ಸುತ್ತಿ, ಕೈಯಲ್ಲಿ ಖಡೆ ಹಾಗೂ ತಲವಾರ ಇರಿಸಿಕೊಳ್ಳುವುದು ಶೋಭಾಯಮಾನ ಎಂದು ಪರಿಗಣಿಸ್ಪಡುತ್ತದೆ.


ಇನ್ನು ಇದೇ ಸಂಪ್ರದಾಯಗಳು ಸೆಕ್ಸ್ ಅಥವಾ ಲೈಂಗಿಕತೆಗೆ ಬಂದರೆ ಅವುಗಳು ಕೂಡಾ ಒಂದು ದೇಶದಿಂದ ಇನ್ನೋಂದು ದೇಶಕ್ಕೆ ಭಿನ್ನ ಭಿನ್ನವಾಗುತ್ತ ಹೋಗುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಷ್ಟ ನಮ್ಮ ದೇಶದಲ್ಲಿ ಅದು ತುಂಬಾ ಸುಲಭ ಹಾಗೆ ನಮ್ಮಲ್ಲಿ ಎಲ್ಲೆಂದರಲ್ಲಿ ಹುಡುಗಾ ಹುಡುಗಿ ಮುತ್ತು ಕೊಡುವುದು ನಿಷೇದ ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದು ತುಂಬಾ ಸರಳ. ಭಾರತ ದೇಶದಲ್ಲಿ ಹುಟ್ಟಿನಿಂದ ಸಾಯುವವರೆಗೆ ಎಲ್ಲದಕ್ಕೂ ತಮ್ಮದೇ ಆದ ಕಟ್ಟಳೆಗಳನ್ನು, ನಿಯಮಗಳನ್ನು ಹಾಕಿದ್ದಾರೆ. ಹಾಗೆಯೇ ಲೈಂಗಿಕತೆಗೂ ಒಂದು ಕಟ್ಟಳೆ ಹಾಕಿ ವಿವಾಹ ಎನ್ನುವ ನಿರ್ಬಂಧವನ್ನು ಹೇರಿದ್ದಾರೆ. ಒಂದು ಗಂಡು-ಹೆಣ್ಣಿನ ನಡುವೆ ವಿವಾಹ ಪೂರ್ವ ಹಾಗೂ ವಿವಾಹದ ಹೊರಗಡೆ ನಡೆಸುವ ಸೆಕ್ಸನ್ನು ನಮ್ಮ ದೇಶ ಒಪ್ಪುವದಿಲ್ಲ. ಆದರೆ ಬೇರೆ ರಾಷ್ಟ್ರಗಳಲ್ಲಿ ಅದೇಲ್ಲಾ ಸಿಗರೇಟು ವಿಸ್ಕಿ ಕುಡಿದಷ್ಟು ಸರಳ ವ್ಯವಹಾರವಾಗಿದೆ. ಸಂಪ್ರದಾಯ ಎನ್ನುವ ಆ ಚೌಕಟ್ಟನ್ನು ತೆಗೆದು ನೋಡಿದಾಗ ಅಲ್ಲಿ ನಡೆಯುವುದು ಅದೇ ಕ್ರೀಯೆ. ಎರಡು ಮನಸ್ಸು ಹಾಗೂ ಎರಡು ದೇಹಗಳ ಒಂದು ಗೂಡುವಿಕೆ. ಆದರೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಯಾವೊದನ್ನು ತಾತ್ಪೂರ್ತಿಕವಾಗಿ ಕಂಡಿಲ್ಲಾ ಎಲ್ಲ ಸಂಬಂಧಗಳಿಗೂ ಶಾಸ್ವತತೆಯನ್ನು ಕೊಟ್ಟಿದೆ. ನಮ್ಮ ಪೂರ್ವಜರು ಲೈಂಗಿಕ ಕ್ರೀಯೆ ಕೇವಲ ತಾತ್ಕಾಲಿಕ ಸುಖಃ ಗೋಸ್ಕರವಾಗಿ ನಡೆದು ಮುಗಿಯುವುದಲ್ಲಾ ಎಂದು ಅರಿತು ಅದಕ್ಕೆ ಶಾಸ್ವತವಾದ ವಿವಾಹ ಎನ್ನುವ ಬೆಸುಗೆಯನ್ನು ಹಾಕಿದ್ದಾರೆ. ಸಧ್ಯ ಏಡ್ಸ ಎನ್ನುವ ಮಹಾ ಮಾರಿಗೆ ಹೆದರಿ ಇಡೀ ಜಗತ್ತು ಭಾರತೀಯ ವಿವಾಹದ ಸಂಪ್ರದಾಯವನ್ನು ಒಪ್ಪಿಕೊಂಡು ಅನುಸರಿಸುತ್ತಲಿದೆ. ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಂದೇ ಗಂಡು ಎನ್ನುವ ನಿಯಮ ಪಾಲಿಸುವತ್ತ ಇಡೀ ಜಗತ್ತು ವಿಚಾರಿಸುತ್ತಿದೆ. ವಿವಾಹದ ಹೊರಗಡೆ ನಡೆಯುವ ಎಲ್ಲ ದೈಹಿಕ ಸಂಬಂಧಗಳನ್ನು ಅನೈತಿಕ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇದರಿಂದ ದೈಹಿಕ, ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅಷ್ಟೇ ಅಲ್ಲ ಅದೇಷ್ಟೋ ಸಂಸಾರಗಳು ಹಾಳಾಗಿವೆ.
ಅಷ್ಟಕ್ಕೂ ಈ ಅನೈತಿಕ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು ವಿಚಾರಿಸಲಾಗಿ ಇಂದಿನ ಗಡಿಬಿಡಿ ಜೀವನ ಶೈಲಿಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಸಂಸಾರದ ನೊಗವನ್ನು ಸಮವಾಗಿ ಹಂಚಿಕೊಂಡು ಜೀವನ ನಡೆಸುತ್ತಿದ್ದಾರೆ. ಇಬ್ಬರು ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇದರಿಂದ ಒಬ್ಬರಿಗೋಬ್ಬರು ನೋಡುದಕ್ಕಾಗಿ ವಿಕೇಂಡ್ ನ ದಾರಿ ಕಾಯಬೇಕಾಗುತ್ತದೆ. ಹಾಗಾದಾಗ ಮನಸ್ಸು ಅಂತಹ ಖಾಲಿಯಾದ ಆ ಜಾಗದಲ್ಲಿ ಒಂದು ಸಹ ಹೃದಯವನ್ನು ಬಯಸುವುದು ತುಂಬಾ ಸಹಜ. ಹೀಗೆ ತಮ್ಮ ಒಡನಾಟದಲ್ಲಿ ಬರುವ ಕೋ-ವರ್ಕರ್ ಗಳೊಂದಿಗೆ ಗಂಡ ಹಾಗೂ ತಮ್ಮ ಮನೆಯ ಸುತ್ತ ಇರುವ ಹುಡುಗನೊಂದಿಗೆ ಹೆಂಡತಿ ಸಣ್ಣದೊಂದು ಗೆಳೆತನ ಪ್ರಾರಂಭಿಸುತ್ತಾರೆ. ಮುಂದೆ ಅದೇ ಒಂದು ಪ್ರೇಮವಾಗಿ ಬೆಳೆಯುತ್ತದೆ. ಇದ್ದ ಸಂಸಾರದಲ್ಲಿಯ ತಾಪತ್ರಯಗಳನ್ನು ಸರಿದೂಗಿಸಲು ಪ್ರಾರಂಭಿಸಿದ ಹೊಸ ಸಂಬಂಧ ಮುಂದೆ ಅದೇ ಒಂದು ತಾಪತ್ರಯವಾಗಿ ಪರಿಣಮಿಸುತ್ತದೆ. ಅದರಿಂದ ಹೊರಬರುವಲ್ಲಿ ಇದ್ದ ಸಂಸಾರ ಸರಿಯಾಗಿ ಉಳೀಯುತ್ತದೆ ಎನ್ನುವ ಭರವಸೆ ಸಹಿತ ಉಳಿಯುದಿಲ್ಲ. ಅದನ್ನು ಅರಿತ ನಮ್ಮ ಪೂರ್ವಜರು ಅದಕ್ಕೆ ಒಂದು ಸಂಪ್ರದಾಯವನ್ನು ಹಾಕಿದ್ದಾರೆ. ಪ್ರೀತಿ ಅದೇಷ್ಟೇ ಆಳವಾಗಿರಲಿ, ಗಾಢವಾಗಿರಲಿ, ಅದು ಸಂಪ್ರದಾಯ ಬದ್ದವಾಗಿರದಿದ್ದರೆ ಅದನ್ನು ಅನೈತಿಕತೆ ಎನ್ನುತ್ತದೆ ಸಂಫ್ರದಾಯ. ಅದಕ್ಕೆ ಹೆಂಡತಿ ಹೆಂತವಳೇ ಇರಲಿ ಗಂಡ ಹೆಂತವನೇ ಇರಲಿ ಅವರೊಂದಿಗೆ ಕಡೆತನಕ ಜೀವನ ಸಾಗಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಕಾರಣ ಲೈಂಗಿಕತೆ ಸುರಕ್ಷಿತ ವಾಗಿದ್ದರೆ ಸಮಾಜ ಸುರಕ್ಷಿತವಾಗಿರುತ್ತದೆ.

ಅದೆನೇ ಇರಲಿ ನೈತಿಕ-ಅನೈತಿಕತೆಯ ಗೊಡವೆಯನ್ನು ಬಿಡಿ, ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಿದೆ. ಆದಷ್ಟು ಬೇಗ ಸಾಂಪ್ರದಾಯಕವಾಗಿ ಮದುವೆಯಾಗಿ ಗಂಡ-ಹೆಂಡತಿ ಜೊತೆಯಾಗಿ ಮಳೆಗಾಲದ ಸವಿಯನ್ನು ಸವಿಯಿರಿ ಎನ್ನುತ್ತ ಮುಗಿಸುತ್ತೇನೆ.