Search This Blog

Monday, October 17, 2011

ಹಿಗೋಂದು ಊರಲ್ಲಿ ಒಂದು . . . (ಕಥಾ ಹಂದರ)

ಹಿಗೋಂದು ಊರಲ್ಲಿ ಒಂದು ಬಡ ಕುಟುಂಬ ಬಟ್ಟೆಗೆ ಇದ್ದರೆ ತಿಂಡಿಗೆ ಇಲ್ಲಾ, ತಿಂಡಿಗಿದ್ದರೆ ಬಟ್ಟೆಬರೆಗಳಿಗೆ ಇಲ್ಲಾ. ಆ ಊರಿನ ಶ್ರೀಮಂತರ ಮನೆಗಳಲ್ಲಿ ಜೀತದ ಆಳಾಗಿ ಗಂಡ ದುಡಿಯುತ್ತಿದ್ದರೆ ಹೆಂಡತಿ ಅವರುಗಳ ಮನೆಗೆಲಸವನ್ನು ಮಾಡುತ್ತಿದ್ದಳು. ಅವರು ಕೊಟ್ಟ ಎಂಜಲು ಅಡುಗೆಯನ್ನೇ ಮನೆಗೆ ತಂದು ಬಿಸಿ ಮಾಡಿ ಗಂಡನಿಗೂ ಕೊಟ್ಟು ತಾನು ತಿನ್ನುತ್ತಿದ್ದಳು. ದಟ್ಟ ದಾರಿದ್ರ್ಯದ ಇನ್ನೊಂದು ಹೆಸರು ಅವರ ಬದುಕು. ಅದರಲ್ಲಿಯೂ ಅವರಿಗಿರೋದು ಒಂದೇ ಒಂದು ಆಸೆ. ಅದು ಸಂತಾನ ಪ್ರಾಪ್ತಿ. ಅದೇಷ್ಟೋ ದೇವರುಗಳಿಗೆ ಹರಿಕೆ ಹೊತ್ತು ಗುಡಿಗುಂಡಾರಗಳನ್ನು ಸುತ್ತಾಡಿ ಬಂದರು ಮಕ್ಕಳಾಗಿರಲಿಲ್ಲಾ.

ಯಾವುದೋ ಒಂದು ಶುಭ ಗಳಿಗೆ ಆಂಜನೇಯನ ಗುಡಿಗೆ ಹೋಗಿ ಹರಿಕೆ ಹೊತ್ತ ಮೇಲೆ ಗರ್ಭನಿಂತಿತು. ಅಂದೇ
ರಾತ್ರಿ ಕನಸಿನಲ್ಲಿ ಒಬ್ಬ ಮನುಷ್ಯ ಬಂದಹಾಗಾಯಿತು. ನಿಮ್ಮ ಪೂರ್ವಜನ್ಮದ ಪಾಪ ಪುಣ್ಯಗಳ ಲೆಕ್ಕಹಾಕಿ ಈ ಮಗುವನ್ನು ಕಲ್ಪಸಿದ್ದೇನೆ. ಇದರ ಆಗೋ ಹೋಗುಗಳು ನನ್ನದಲ್ಲ ಅದು ಕೇವಲ ನಿಮ್ಮ ಕರ್ಮಫಲ ಎಂದು ಹೇಳಿ ಮರೆಯಾದ ಹಾಗಾಯಿತು ಹೆಂಡತಿಗೆ ಪರಮಾಶ್ಚರ್ಯ ಕಣ್ಣು ಬಿಟ್ಟರೆ ಸುತ್ತೆಲ್ಲ ಬರಿ ಕತ್ತಲು. ಸರಿ ಇದು ಕನಸು ಆಗಿದ್ದಾಗಲಿ ಮಗುವಾದರು ದಯಪಾಲಿಸಿದನಲ್ಲಾ ಎಂದು ದಂಪತಿಗಳು ಖುಷಿಯಾದರು. ಆಗ ಅವರಿಗೆ ಆಕಾಶ ಮುರೇ ಗೇಣು.

         ಗಂಡು ಮಗು ಜನ್ಮ ಪಡೆಯಿತು. ತುಂಬಾ ಸುಂದರವಾದ ಮಗು ಒಂದು ತಟ್ಟೆಯಲ್ಲಿ ನೀರು ಹಾಕಿ ಬೆಳದಿಂಗಳಿನಲ್ಲಿ ಹುಣ್ಣುಮೆಯ ಚಂದ್ರನನ್ನು ನೋಡಿದ ಹಾಗೆ ಹಾಲ್ಗೆನ್ನೆಯ ಆ ಮಗು ನೋಡಿದರೆ ದೃಷ್ಟಿ ತಾಗಬೇಕು. ಅಂತಹ ಮಗು ಹುಟ್ಟಿದಾಗಿನಿಂದ ತುಂಬಾ ಕಿರಿ ಕಿರಿ ಮಾಡುತ್ತಲಿತ್ತು. ಹೊಟ್ಟೆ ಹಸಿದರೂ, ಹೊಟ್ಟೆ ತುಂಬಿದರು ತಾಯಿ ಅವನ ಹತ್ತಿರವೇ ಬೇಕು. ಅವಳನ್ನು ಬಿಟ್ಟು ಒಂದು ಗಳಿಗೆಯು ನಿಲ್ಲುತ್ತಿರಲಿಲ್ಲಾ, ಯಾರ ಹತ್ತಿರವೂ ಹೋಗುತ್ತಿರಲಿಲ್ಲಾ. ಯಾವುದೇ ಕೆಲಸ ಕಾರ್ಯಗಳು ಇರಲಿಅದನ್ನು ಹೊತ್ತುಕೊಂಡೆ ಮಾಡಬೇಕು. ತುಂಬಾ ವರ್ಷಗಳ ನಂತರ ಹುಟ್ಟಿದ್ದಕ್ಕಾಗಿ ತಾಯಿಗೂ ವಯಸ್ಸಾಗಿತ್ತು. ಅವಳ ಕಷ್ಟ ಯಾರಿಗೂ ಬೇಡ. ಒಂದೊಂದು ಸಾರಿ ಬೆಸತ್ತು ಯಾವ ಜನ್ಮದ ಕರ್ಮಾನೋ ಎಂದು ಬೈಯುತ್ತಿದ್ದಳು ಪ್ರತಿಸಾರಿ ಬೈದಾಗೋ ನೆನಪಾಗುತ್ತಿದ್ದ ಕನಸಿನಲ್ಲಿ ಬಂದಿದ್ದ ಆ ದೈವದೂತ. ಆದರೂ ಮಗು ತಾಯಿಗೆ ಭಾರಾನಾ ಎಂದುಕೊಂಡು ಹೇಗೂ ಅದನ್ನು ಮಡಿಲ್ಲಲ್ಲಿ ಇಟ್ಟುಕೊಂಡ ಕೆಲಸ ಮಾಡುತ್ತಿದ್ದಳು ಆದರೆ ಒಂದು ದಿನ.

ಸಾಯಂಕಾಲದ ಸಮಯ ಮಗುವನ್ನು ಬೆನ್ನಿಗೆ ಕಟ್ಟಿಕೊಂಡು ಕಸ ಗುಡಿಸುತ್ತಿದ್ದಳು ಒಬ್ಬ ಗಡ್ಡದಾರಿ ತಪಸ್ವಿ ಸಾದು
ಹರಿ ಓ00000. . . ಭವತಿ ಬೀಕ್ಷಾಂದೇಹಿ ಎಂದು ಬಿಕ್ಷೆಗೆ ಬಂದ. ಈಕೆ ತಲೆ ಎತ್ತಿ ಅವನನ್ನು ನೋಡಿಯೂ ಇಲ್ಲಾ ಕೇವಲ ಒಂದು ವರ್ಷದ ಮಗುವನ್ನು ಉದ್ದೇಶಿಸಿ ಯಾಕೋ ಮಂಡಳವೇಡೆ ನಿನ್ಯಾಕೋ ಇಲ್ಲಿ ಎಂದು ಉದ್ಘರಿಸಿದ. ತಾಯಿಗೆ ಅಚ್ಚರಿ. ? ಪಕ್ಕದ ಗೋಡೆಯ ಮೇಲೆ ಈಕೆದೇ ನೆರಳು ಬೆನ್ನು ಮೇಲೆ ಕಟ್ಟಿಕೊಂಡ ಮಗುವಿನಿಂದ ಕೈ ಸೊನ್ನೆ ಶ್!!!!!!!!! ಶ್ !!!!! . . . ಅದನ್ನು ಪಕ್ಕಾ ನೋಡಿದ ತಾಯಿ ಎದೆ ಒಡಿಯಿತು. ಇದೇನು ಒಂದು ವರ್ಷದ ಮಗು ಈ ಸಾದು ತಪಸ್ವಿಯ ಮಾತಿಗೆ ಪ್ರತಿಕ್ರೀಯೆಸಿತು. ನೋಡಿ ತಾಯಿ ಗಾಬರಿ ಆದಳು. ಯಾರು ಮಂಗಳವೇಡೆ ಎಂದು ಕೇಳಿದಳು ಯಾರಿಲ್ಲಮ್ಮಾ ಸುಮ್ಮೆ ಮಗುವನ್ನ ಆಡಿಸಿದೆ ಎಂದು ಹೇಳಿ ಬಿಕ್ಷೆ ತೆಗೆದುಕೋಂಡು ಹೋದ. ಆದರೆ ಅದು ತಾಯಿಯ ಮನಸ್ಸಿನಲ್ಲಿ ಉಳಿಯಿತು.

ಮಾರನೇ ದಿನ ಬೆಳಿಗ್ಗೆ ತಾಯಿ ತಪಸ್ವಿ ತಂಗಿದ್ದ ಆಂಜನೇಯ ಗುಡಿಯ ಹತ್ತಿರಕ್ಕೆ ಹೋದಳು. ಅವನ ಕಾಲುಗಳಿಗ
ನಮಸ್ಕರಿಸಿ, ಅಳುತ್ತಾ ಬೇಡಿಕೊಂಡಳು ಯಾರು ನನ್ನ ಮಗು, ಅವನನ್ನು ಉದ್ದೇಶಿಸಿ ನೀವು ಮಾತನಾಡಿದ್ದನ್ನು ನಾನು ಕೇಳಿದೆ. ಆ ಒಂದು ವರ್ಷದ ಮಗು ನಿಮಗೆ ಪ್ರತಿಕ್ರೀಯಿಸಿದ್ದನ್ನು ನೋಡಿ ದಂಗಾಗಿದ್ದೇನೆ. ದಯವಿಟ್ಟು ಹೇಳಿ ಎಂದು ಪರಿ-ಪರಿಯಾಗಿ ಬೇಡಿಕೊಂಡಳು. ಆಗ ಆ ತಪಸ್ವಿ ತನ್ನ ದಿವ್ಯ ದೃಷ್ಟಿಯಿಂದ ಎಲ್ಲ ಸಂಗತಿಯನ್ನು ತಿಳೀದು ನೋಡಮ್ಮಾ ಆತ ಮಂಡಳವೇಡೆ ಅಂಥಾ. ರಾಕ್ಷೇಸಿ ಕುಲದವನು ಸುಮಾರು ವರ್ಷಗಳ ಹಿಂದೆ ದುರಾತ್ಮಗಳನ್ನೇ ಪಳಗಿಸಿ ಅವುಗಳಿಂದ ಕೆಟ್ಟ ಕೆಲಸಗಳನ್ನು ಮಾಡಿಸುತ್ತಿದ್ದ.

ಇದು ನಿಜವೇ ನನಗೆ ನಂಬಲು ಆಗುತ್ತಿಲ್ಲಾ ಎಂದಳು.

ಹಾಗಾದರೆ ಬರುವ ಹುಣ್ಣುಮೆಯ ರಾತ್ರಿಯಂದು ನೀವು ಒಂದು ಬಂಡಿಗಾಡಿಯನ್ನು ಹೂಡಿ ಅದರಲ್ಲಿ ಎಲ್ಲ ತರಹದ
ಬಕ್ಷ ಭೋಜನಗಳನ್ನು ತಯಾರಿಸಿಕೊಂಡಿರಿ, ಹಣ್ಣು ಹಂಪಲುಗಳನ್ನು ತುಂಬಿರಿ ಅಲ್ಲದೇ ಎರಡು ಕುರಿ (ಹೋತು ಮರಿ) ಗಳನ್ನು ತೆಗೆದುಕೊಂಡು ಈ ಊರಿನಿಂದ ಪೂರ್ವದಿಕ್ಕಿನಲ್ಲಿ ಸುಮಾರು ದೂರ ಹೋದಾಗ ಒಂದು ಅರಣ್ಯ ಬರುತ್ತದೆ. ಅಲ್ಲಿ ನಡು ಅರಣ್ಯದಲ್ಲಿ ಅವುಗಳನ್ನೇಲ್ಲ ಇಟ್ಟು ಅಲ್ಲಿಂದ ದೂರದಲ್ಲಿ ನೀವು ಕುಳಿತುಕೊಳ್ಳಿ ಯಾವುದೇ ಕಾರಣಕ್ಕೂ ನೀವು ಅದಕ್ಕೆ ಕಾಣಲೇಬಾರದು ಅದು ನಿಮಗೆ ಕಂಡರೆ ಸಾಕು. ಅದೇಷ್ಟೇ ಅತ್ತರು, ಚೀರಿದರು ಅದರ ಕಡೆಗೆ ನೀವು ಹೋಗಬೇಡಿ ಮುಂದೆ ನೋಡಿ ಅದರ ಆಟವನ್ನು ಎಂದು ಹೇಳಿ ಕಳುಹಿಸಿದ.

       ಸರಿ ಹುಣ್ಣಿಮೆಯ ದಿನ ಎಲ್ಲ ತಯಾರಿಮಾಡಿಕೊಂಡು ಇಬ್ಬರು ದಂಪತಿಗಳು ರಾತ್ರಿ ಬಂಡಿಹೂಡಿ ಹೊರಟರು
ಸುತ್ತಲು ನಿರ್ಜನ ವಾತಾವರಣ ಎಲ್ಲಿಯವರೆಗೆ ನೋಡಿದರು ಬರಿ ಕಾಡು ಅಲ್ಲಿಯೇ ಒಂದು ಗಿಡದ ಕೆಳಗೆ ಎಲ್ಲವನ್ನು ಇಟ್ಟು ಅಲ್ಲಿಂದ ದೂರ ದೂರ ಬಂದು ಬೇರೊಂದು ಗಿಡದ ಮೇಲೆ ಏರಿ ಇಬ್ಬರು ದಂಪತಿಗಳು ಕುಳಿತರು. ಅರಣ್ಯದಲ್ಲಿ ಹಿಮಹಾಸಿದ ಹಾಗೆ ಎಲ್ಲಡೆ ಬೆಳದಿಂಗಳು. ದೂರದಿಂದ ನೋಡುತ್ತಿದ್ದಾರೆ. ಮಗು ಅಳಲು ಪ್ರಾರಂಭಿಸಿತು. ಜೋರಾಗಿ ಜೋರಾಗಿ ಚೀರಿ ಚೀರಿ ಅಳಲು ಪ್ರಾರಂಭಿಸಿತು. ಇಲ್ಲಿ ತಾಯಿಗೆ ಅದರ ಧ್ವನಿ ಕೇಳಿ ತಡೆಯಲು ಆಗುತ್ತಿಲ್ಲಾ. ಅದರ ಧ್ವನಿಗೆ ಎದೆಯೊಡೆದು ಹಾಲು ಹೊರ ಸೂಸುತ್ತೀವೆ. ಇನ್ನೇನು ಎದ್ದು ಅವನೆಡೆಗೆ ಹೋಗಬೇಕು ಅನ್ನುವಷ್ಟರಲ್ಲಿ ಸಾಧು ತಪಸ್ವಿಯ ಮಾತು ನೆನಪಿಗೆ ಬಂತು ಮತ್ತೆ ತಡೆದಳು. ಅಷ್ಟರಲ್ಲಿ ಮಗು ಎದ್ದು ಕುಳಿತುಕೊಂಡಿತ್ತು ಅತ್ತ ಇತ್ತ ನೋಡುತ್ತ ಎದ್ದ ನಿಂತಿತು. ಇಷ್ಟೋತ್ತು ಅಳುತ್ತಿದ್ದ ಮಗು ಒಂಮ್ಮಿಂದೊಮ್ಮಿಗೆ ನಗಲು ಪ್ರಾರಂಭಿಸಿತು. ನಗು ಮುಂದೆ ಜೋರಾಗಿ ಹಾ ಹಾ ಹಾ ಹಾ . . . ಎಂದು ಗಹಗಹಿಸಿ ನಗಲಾರಂಭಿಸಿತು. ಅದರ ಕೈಗಳು ಎರಡರಿಂದ ನಾಲ್ಕು ನಾಲ್ಕರಿಂದ ಆರಾದವು ಅದೇಷ್ಟೋ ವರ್ಷಗಳಿಂದ ಉಪವಾಸವಿರುವಹಾಗೆ


ನೋಡು ನೋಡುತ್ತಿದ್ದಂತೆ ಒಂದೊಂದಾಗಿ ಬಾಯಿಹಾಕಿತು. ಹಣ್ಣು ಹಂಪಲು ಹಾಗೂ ಎಲ್ಲ ತರಹದ ಬಕ್ಷ
ಬೋಜನವನ್ನು ತಿಂದು ತೇಗಿತು, ಇನ್ನೂ ಹೊಟ್ಟೆ ತುಂಬಿಲ್ಲಾ ಅನ್ನುವ ತರ ಆ ಕಡೆ ಇ ಕಡೆ ನೋಡುತೊಡಗಿತು ಅಲ್ಲಿ ಕಂಡಿದ್ದು, ಆ ಎರೆಡು ಕುರಿಗಳು ಅವುಗಳನ್ನು ತನ್ನ ಆರು ಕೈಗಳಿಂದ ಹರಿದು ಹಸಿ ರಕ್ತದೊಂದಿಗೆ ಗಂಟಲಿಗೆ ಹಾಕಿಕೊಂಡಿತು. ಹೀಗೆ ಎಲ್ಲ ತಿಂದಬಳಿಕ ಕೆ. ಕೆ. ಹಾಕುತ್ತಾ ಅಲ್ಲಿಂದ ಉತ್ತರ ದಿಕ್ಕಿನೆಡೆಗೆ ಓಡಿ ಹೋಯಿತು. ನಂತರ ದಂಪತಿಗಳು ಸ್ವಾಮಿಯನ್ನು ಕಂಡರು. ಮುಂದೆ ಅವನು ಹೇಳಿದ ಹಾಗೆ ಸುಖ ಜೀವನ ನಡೆಸಿದರು ಎಂದು ಹೇಳುವಷ್ಟರಲ್ಲಿ ನಮಗೆ ನಿದ್ದೆ ಬಂದಿರುತ್ತಿತ್ತು. ಇಂತಹ ಅದೇಷ್ಟೋ ಕಥೆಗಳನ್ನು ತನ್ನ ನೆನಪಿನ ಬುತ್ತಿಯ ಗಂಟು ಬಿಚ್ಚುತ್ತಾ ನಮ್ಮ ಅಜ್ಜಿ ಆಗಾಗ ತಿನಬಡಿಸುತ್ತಿದ್ದಳು.

ನಿಮ್ಮವ .
ಎ. ಜಿ. ವಿಜಿ,
ವಿಜಾಪೂರ.

Tuesday, August 23, 2011

ತಿಲಾಂಜಲಿ ಇಟ್ಟಿತ್ತೇ ಭಾರತ ಬ್ರಷ್ಟಾಚಾರಕ್ಕೆ ?

ಮೊದಲು ಹಜಾರೆ ಅಜ್ಜ (ಣ್ಣ)ನಿಗೊಂದು ನಮಸ್ಕಾರ. ಏಕೆಂದರೆ ನರ ಸತ್ತ ನಾಯಿಯತರ ಜಿಡ್ಡು ಹಿಡಿದುಕೊಂಡು ಮಲಗಿರುವ ನಮ್ಮ ಭಾರತೀಯ ನಾಗರಿಕರಿಗೆ ಒಂದು ರೀತಿ ಸಂಜಿವೀನಿಯಂತಾಗಿ ಕಂಡು ಬಂದ ಮನುಷ್ಯ ಅಣ್ಣಾ ಹಜಾರೆ. ಬ್ರಷ್ಟಾಚಾರದ ಪಾಪ ಕೂಪದಲ್ಲಿ ಬಿದ್ದು ಒದ್ದಾಡುತ್ತಿರುವ ನಮಗೆಲ್ಲರಿಗೂ ಅದನ್ನು ಮೀರಿ ಬದುಕಲು, ಹೊರನಿಲ್ಲಲು ಸಾಧ್ಯವೆಂಬ ಒಂದು ಆಶಾಕಿರಣವನ್ನು ತೋರಿಸಿದ ಧೀರ ವ್ಯಕ್ತಿ.
ಸುಮಾರು ಕ್ರೀ. ಶ. 1600 ರಲ್ಲಿ ಭಾರತಕ್ಕೆ ಬ್ರಿಟಿಷರ ಎಂಟ್ರಿ ಅಲ್ಲಿಂದ 1947 ಅವರು ಇಲ್ಲಿಂದ ಎಕ್ಷ್ಸಿಟ್ ಆದ ವರ್ಷ. ಅಂದರೆ ಅಂದಾಜು 300 ರಿಂದ 350 ವರ್ಷಗಳ ಕಾಲ ಅವರು ಅನಾಮತ್ತಾಗಿ ನಮ್ಮನ್ನು ಆಳಿದರು. ಸಧ್ಯ ಸ್ವಾತಂತ್ರ್ಯ ಪಡೆದುಕೊಂಡು 60 ಕ್ಕೂ ಹೆಚ್ಚು ವರ್ಷಗತಿಸಿದರೂ ನಮಗೆ ಭಾರತ ನಮ್ಮದು ಅಂತಾ ಅನ್ನಿಸ್ತಾ ಇಲ್ಲಾ. ಇಲ್ಲಿ ಕಾಯ್ದೆ ನಿರ್ಮಿಸುವವರಿಗಿಂತ ಪಾಲಿಸುವವರಿಗಿಂತ ಮುರಿಯುವವರು ಹೆಚ್ಚಿದ್ದಾರೆ. ಒಬ್ಬರಿಗೆ ಅನ್ಯಾಯ ಮಾಡಿದರೆ ಮೋಸಮಾಡಿದರೆ ಅದು ನಮ್ಮವರಿಗೆ ನಾವೇ ಮೋಸ ಮಾಡುತ್ತಿದ್ದೇವೆ ಅನ್ನುವ ಭಾವ ಮನಸ್ಸಿನಲ್ಲಿ ಮೂಡುತ್ತಿಲ್ಲಾ. ಒಟ್ಟಾರೆ ಹುಚ್ಚಿ ಮದುವೆಯಲ್ಲಿ ಉಂಡವನೇ ಜಾಣ ಎಂಬತ್ತಾಗಿದೆ ದೇಶದ ಪರಿಸ್ಥಿತಿ.
ಒಬ್ಬ ಗುಮಾಸ್ತನಿಂದ ಹಿಡಿದು ಉನ್ನತಾತೀ ಉನ್ನತ ಅಧಿಕಾರಿ, ಮಂತ್ರಿಗಳವರೆಗೆ ಎಲ್ಲರೂ ಲಂಚಕ್ಕಾಗಿ ಬ್ರಷ್ಟಾಚಾರಕ್ಕಾಗಿ ಬಾಯ್ತೆರೆದು ನಿಂತಿದ್ದಾರೆ. ಸಣ್ಣ ಅತೀ ಸಣ್ಣ ಕೆಲಸವು ಕೂಡಾ ಲಂಚದ ಮೇಲೆ ಅವಲಂಬಿಸಿದೆ. ಲಂಚಾವತಾರ, ಬ್ರಷ್ಟಾಚಾರ ಎನ್ನುವುದು ಪಡೆಂಬೂತವಾಗಿ ಬೆಳೆದು ನಿಂತಿದೆ. ದೇಶದ ಯುವ ಜನತೆಗೆ ದಾರಿಕಾಣದಂತಾಗಿದೆ. ಇದೇ ಸಮಯದಲ್ಲಿ ಗಾಂಧೀಜಿಯನ್ನು ನಂಬಿದವ, ಅವರ ವಿಚಾರಗಳನ್ನು ಪಾಲಿಸುವವ, ಅವರ ಅನುಯಾಯಿ ಒಬ್ಬ ಇದೆಲ್ಲದರಿಂದ ಬೆಸತ್ತು ಮತ್ತೇ ಗಾಂಧೀಜಿಯ ತತ್ವಗಳನ್ನು ಹೇಳುತ್ತಾ, ಅವರ ನಿಯಮಗಳನ್ನು ಪಾಲಿಸುತ್ತಾ ಟೊಂಕಕಟ್ಟಿ ನಿಂತಿದ್ದಾನೆ. ಬ್ರಷ್ಟಾಚಾರದ ವಿರುದ್ಧ ಹೋರಾಟಕ್ಕೆ ನಿಂತು ಉಪವಾಸ ಸತ್ಯಾಗ್ರಹ ಕೈಕೊಂಡು ಸರ್ಕಾರಕ್ಕೆ ಬಿಸಿ ಮುಟ್ಟಿಸಿದ್ದಾನೆ. ಜನ ಲೋಕಪಾಲ ಮಸೂದೆಯನ್ನು ಜಾರಿಯಲ್ಲಿ ತರಬೇಕು. ಸಕಲ ಪ್ರಜೆಗಳನ್ನು ಸಮಾನ ದೃಷ್ಟಯಿಂದ ಕಾಣುವಂತಾಗಬೇಕು. ಉನ್ನತ ಅಧಿಕಾರಿಗಳು, ಮಂತ್ರಿ ಮಹೋದಯರು ಈ ಕಾಯ್ದೆಯ ಅಡಿಯಲ್ಲಿ ಬರುವಂತಾಗಬೇಕು. ಪ್ರತಿ ಕೇಸು 06 ತಿಂಗಳಿಂದ 01 ವರ್ಷದೊಳಗೆ ಕೊನೆಯಾಗಬೇಕು. ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು.
ಸರ್ಕಾರ ಕಾಲಾವಧಿ ತೆಗೆದುಕೊಂಡರು ಅದನ್ನು ಪೂರ್ತಿಯಾಗಿ ಒಪ್ಪದೇ ಅದರಲ್ಲಿ ಹಲವಾರು ಬದಲಾವಣೆಗಳನ್ನು ಮಾಡಿದನ್ನು ವಿರೋಧಿಸಿ ಮತ್ತೋಮ್ಮೆ ಉಪವಾಸ ಕೂಡಲು ಹೊರಟವರನ್ನು ನಿನ್ನೆ ಜೈಲಿಗೆ ಹಾಕಿ ರಾತ್ರಿ ಸುಮಾರಿಗೆ ಬಿಡುಗಡೆಗೊಳಿಸಿದೆ. ಏಕೆಂದರೆ ನಗರಕ್ಕೆ ನಗರಗಳಲ್ಲದೇ ಹಲವಾರು ರಾಜ್ಯಗಳಲ್ಲಿ ಹಾಗೂ ಪೂರ್ತಿಯಾಗಿ ದೇಶಕ್ಕೆ ದೇಶವೇ ಒಂದು ಗೂಡಿ ಧ್ವನಿ ಎತ್ತಿದ್ದಕ್ಕೆ ಮಣಿದು ಅವರಿಗೆ ಬಿಡುಗಡೆಗೊಳಿಸಿದ್ದಾರೆ. ಅದರಿಂದ ಅವರ ಬೆಂಬಲಕ್ಕೆ ನಿಂತವರೆಲ್ಲ ಖುಷಿ ಆಚರಿಸಿದ್ದೇವೆ.


ಇದು ಕೊನೆಯಲ್ಲಾ ಆರಂಭ ಮಾತ್ರ, ಪ್ರತಿ ಮನೆಯಲ್ಲಿ ಪ್ರತಿ ಮನದಲ್ಲಿ ಒಬ್ಬ ಹೋರಾಟಗಾರ ಹುಟ್ಟ ಬೇಕು. ದೇಶದ ಕಾನೂನು ಹೇಳುವ ಪ್ರಕಾರ ತಪ್ಪು ಮಾಡಿದವನಷ್ಟೇ ಅಲ್ಲಾ ಆ ತಪ್ಪು ಮಾಡಲು ಸಹಾಯ, ಪ್ರೂತ್ಸಾಹ, ಅನುಕೂಲ ಮಾಡಿಕೊಡುವವನು ಅಷ್ಟೇ ತಪ್ಪಿತಸ್ಥ ಎಂದು ಹಾಗಾದರೇ ಬ್ರಷ್ಟಾಚಾರಕ್ಕೆ ಕುಮ್ಮಕ್ಕೂ ಕೊಡುವವರು ಬ್ರಷ್ಟಾಚಾರಿಗಳಾದಂತೆ, ಸಧ್ಯ ಬೆರಳುಮಾಡಿ ತೋರಿಸಲು ಸಾಕಾದಷ್ಟು ಜನ ಸಿಗುತ್ತಾರೆ. ಬೆಂಬಲ ಸೂಚಿಸಲು ಎಲ್ಲರು ಬರುತ್ತಾರೆ. ಆದರೆ ಒಂದು ಪ್ರಶ್ನೆ ? ಬಂದ ಬೆಂಬಲಿಗರಲ್ಲಿ ನಾನು ಪ್ರಾಮಾಣಿಕನಾಗಿದ್ದೇನೆ ಅಥವಾ ಪ್ರಮಾನೀಕನಾಗಿರುತ್ತೇನೆ ಅಂತ ತಮ್ಮ ಆತ್ಮ ಸಾಕ್ಷಿಯನ್ನು ಮುಟ್ಟಿ ಪ್ರಮಾಣೀಕರಿಸುವವರು ಎಷ್ಟು ಜನರಿದ್ದಾರೆ. ಅದನ್ನು ಪಾಲಿಸುವವರು ಎಷ್ಟು ಜನ ಇದ್ದಾರೆ. ಯೋಚಿಸಿ ಇಲ್ಲಾ ಬೆರಳೆಣಿಕೆಯಷ್ಟು ಜನಾನೂ ಸಿಗೋದಿಲ್ಲಾ ಕಾರಣ ಪ್ರತಿಯೊಬ್ಬನಲ್ಲಿ ಅದು ಬ್ರಹ್ಮ ರಾಕ್ಷಸನ ಅವತಾರತಾಳಿದೆ.
ನಾವೆಲ್ಲ ಅವಕಾಶ ವಂಚಿತರು ಇಂದು ಬೆರಳುಮಾಡಿ ತೋರಿಸಲು ನಮಗೆ ತುಂಬಾ ಜನ ಸಿಗುತ್ತಾರೆ. ಆದರೆ ಅದೇ ಸ್ಥಳ, ಅದೇ ಅವಕಾಶ ನಮಗೆ ಸಿಕ್ಕಿದ್ದರೆ ನಾವು ಶಾಸ್ತ್ರಿ, ಗಾಂಧಿ, ವಿಶ್ವೇಶ್ವರಯ್ಯಾ ಅಥವಾ ಅಣ್ಣಾ ಹಜಾರೆ ತರಹ ಬಾಳುತ್ತಿದ್ದೇವಾ ? ಇಲ್ಲಾ ಕಂಡಿತಾ ಇಲ್ಲಾ ನಾವೂ ಕೂಡಾ ಲಾಲು, ಸಿಂದ್ಯಾ, ಚಂಪಂಗಿ, ರೇಣುಕಾಚಾರ್ಯ, ಗಣಿದಣಿಗಳು, 2ಜಿ ಸ್ಪೆಕ್ಟ್ರಮ್ ರಾಜಾ ರಂತೆ ಹಗರಣಗಳನ್ನು ಮಾಡಿಯಾದರೂ ಕೋಟ್ಯಾನು ಕೋಟಿ ಸಂಪಾದಿಸಿ ಸೈಡಿಗೆ ಇಡುತ್ತಿದ್ದೇವು. ಆದರೆ ಅವಕಾಶ ಸಿಕ್ಕಿಲ್ಲಾ ಅಷ್ಟೇ. ಇಲ್ಲಿಯ ಪ್ರತಿಯೊಬ್ಬನ ಮನಸ್ಸು ಕಲೂಷಿತಗೊಂಡಿದೆ. ಪರರ ವಸ್ತುಗಳಡೆ ಆಕರ್ಷಿತವಾಗುತ್ತಿದೆ. ಎಲ್ಲರಿಗೆ ಬೇರೆಯವರ ವಸ್ತುವಿನೆಡಿಗಿನ ವಾಂಚೆ ಹುಚ್ಚರನ್ನಾಗಿಸಿದೆ. ಅದು ತಪ್ಪಬೇಕು. ಸಾದಾ ಜೀವನ ಕ್ರಮ ಬೆಳಸಿಕೊಂಡು ಉಚ್ಚವಿಚಾರಗಳನ್ನು ಇಟ್ಟುಕೊಂಡು ಬದುಕುವುದನ್ನು ಕಲಿಯಬೇಕು. ಪ್ರತಿ ಮನ-ಮನೆ ಸ್ವಚ್ಛವಾದರೆ ನಿರ್ಮಲ ಗ್ರಾಮ ನಿರ್ಮಾಣವಾಗುವುದು ತಡವಿಲ್ಲ. ದೇಶ ಅಭಿವೃದ್ಧಿ ಹೊಂದಲು ಹೆಚ್ಚ ಸಮಯಬೇಕಾಗಿಲ್ಲ.

ಅದಕ್ಕೆ ಇಂದು ಅಣ್ಣಾ ಹಜಾರೆ ಮುನ್ನುಡಿಯನ್ನು ಬರೆದಿದ್ದಾರೆ. ಈ ಕಿಡಿ ನಾಳೆಯ ಉಜ್ವಲ ಭವಿಷ್ಯದಡೆಗೆ ನಮ್ಮನ್ನು ಮುನ್ನಡೆಸಲಿ ಎಂಬ ಆಶಾವಾದದೊಂದಿಗೆ ಮುಗಿಸುತ್ತಿದ್ದೇನೆ.

ನಿಮ್ಮವ

ಎ.ಜಿ. ವಿಜಿ.
ವಿಜಾಪೂರ.

Thursday, May 26, 2011

(ಅ) ನೈತಿಕ

ಯಾವುದೇ ಒಂದು ಜನಾಂಗ ಅಥವಾ ನಾಗರಿಕತೆ ಬೆಳೆಯ ಬೇಕೆಂದರೆ ಸಂತಾನೋತ್ಪತ್ತಿ ಅತೀ ಮಹತ್ವ ಹಾಗೂ ಅವಶ್ಯಕವಾದ ಅಂಶವಾಗುತ್ತದೆ. ಈ ನಿಟ್ಟಿನಲ್ಲಿ ಹೆಣ್ಣು ಗಂಡಿನ ನಡುವೆ ನೈಸರ್ಗಿಕವಾಗಿ ನಡೆಯುವ ಸಂಮ್ಮಿಲನ (ಸೆಕ್ಸ) ಕ್ರೀಯೆಗೆ ಅತೀ ಪ್ರಾಮುಖ್ಯತೆ ಕೊಡಲಾಗಿದೆ. ಗಂಡು ಮೊದಲು ಅಥವಾ ಹೆಣ್ಣು ಮೊದಲು ಎಂಬ ಪ್ರಶ್ನೆಗೆ ಉತ್ತರ ಇನ್ನೂವರೆಗೂ ಸಿಕ್ಕಲ್ಲ. ಅದೇನೆ ಇರಲಿ ಸಧ್ಯ ಮಾನವ ಜನಾಂಗ ಇಲ್ಲಿಯವರೆಗೂ ಮುಟ್ಟಿರುವುದಕ್ಕೆ ಮೊದಲು ಹುಟ್ಟಿದ ಆ ಗಂಡು ಹೆಣ್ಣಿಗೂ ಹಾಗೂ ಅವರ ಸಂಭೋಗದಿಂದ ಜನ್ಮ ತಳೆದ ಮೊದಲ ಮಗುವಿಗೂ ಒಂದು ಸಲಾಮ್ ಹೇಳೋಣ.
ಪ್ರತಿಯೊಂದು ಜನಾಂಗ ಬೆಳೆಯುತ್ತಾ ಬೆಳೆಯುತ್ತಾ ತನ್ನದೇ ಆದ ಸಂಪ್ರದಾಯವನ್ನು ಅಳವಡಿಸಿಕೊಳ್ಳುತ್ತದೆ. ಜನಾಂಗದಿಂದ ಜನಾಂಗಕ್ಕೆ ಸಂಪ್ರದಾಯಗಳು ಬಿನ್ನವಾಗುತ್ತ ಹೋಗುತ್ತವೆ. ಹಾಗೆ ನಮ್ಮ ಹಿಂದು ಸಂಪ್ರದಾಯದ ಪ್ರಕಾರ ಕೆಲವು ನಿಯಮಗಳು ಕಟ್ಟಳೆಗೆ ಒಳಪಟ್ಟರೆ ಕ್ರೈಸ್ತ್, ಮುಸ್ಲಿಂ, ಸಿಖ್, ಜೈನ್ . . . ಹೀಗೆ ಬೇರೆ ಬೇರೆ ಜನಾಂಗಳಲ್ಲಿ ಆ ನಿಯಮಗಳಿಗೆ ಮಣ್ಣನೆ ದೊರೆತಿರಬಹದು. ಇನ್ನೂ ಕೆಲವೊಂದು ಸಂಪ್ರದಾಯಗಳು ಅವರಲ್ಲಿ ತಿರಸ್ಕಾರಕ್ಕೊಳಪಟ್ಟರೆ ಅಂತವುಗಳು ನಮ್ಮಲ್ಲಿ ಪುರಸ್ಕಾರಕ್ಕೆ ಒಳಗಾಗಿರಬಹದು. ಉದಾ : ಮುಸ್ಲಿಂ ಸಂಪ್ರದಾಯದ ಪ್ರಕಾರ ಹೆಣ್ಣು ಮಕ್ಕಳು ಮೂಖಕ್ಕೆ ಬುರಖಾ ಹಾಕಿಕೊಳ್ಳುವುದು, ಯಾವುದೇ ಪ್ರಾರ್ಥನಾ ಮಂದಿರಗಳಲ್ಲಿ ಪ್ರವೇಶ ಇಲ್ಲದಿರುವುದು. ಹಾಗೆ ಹಣೆಯಲ್ಲಿ ಕುಂಕುಮ, ನಾಮ, ತಿಲಕ ವಿಟ್ಟುಕೊಳ್ಳುವುದು, ಸಿಖ್ ರು ಮೂಖದಲ್ಲಿ ಮೀಸೆ, ಗಡ್ಡ ಬಿಟ್ಟು, ತೆಲೆಗೆ ಪೇಟಾ ಸುತ್ತಿ, ಕೈಯಲ್ಲಿ ಖಡೆ ಹಾಗೂ ತಲವಾರ ಇರಿಸಿಕೊಳ್ಳುವುದು ಶೋಭಾಯಮಾನ ಎಂದು ಪರಿಗಣಿಸ್ಪಡುತ್ತದೆ.


ಇನ್ನು ಇದೇ ಸಂಪ್ರದಾಯಗಳು ಸೆಕ್ಸ್ ಅಥವಾ ಲೈಂಗಿಕತೆಗೆ ಬಂದರೆ ಅವುಗಳು ಕೂಡಾ ಒಂದು ದೇಶದಿಂದ ಇನ್ನೋಂದು ದೇಶಕ್ಕೆ ಭಿನ್ನ ಭಿನ್ನವಾಗುತ್ತ ಹೋಗುತ್ತವೆ. ಪಾಶ್ಚಿಮಾತ್ಯ ದೇಶಗಳಲ್ಲಿ ಎಲ್ಲೆಂದರಲ್ಲಿ ಮೂತ್ರ ವಿಸರ್ಜನೆ ಮಾಡುವುದು ಕಷ್ಟ ನಮ್ಮ ದೇಶದಲ್ಲಿ ಅದು ತುಂಬಾ ಸುಲಭ ಹಾಗೆ ನಮ್ಮಲ್ಲಿ ಎಲ್ಲೆಂದರಲ್ಲಿ ಹುಡುಗಾ ಹುಡುಗಿ ಮುತ್ತು ಕೊಡುವುದು ನಿಷೇದ ಆದರೆ ಪಾಶ್ಚಿಮಾತ್ಯ ರಾಷ್ಟ್ರಗಳಲ್ಲಿ ಅದು ತುಂಬಾ ಸರಳ. ಭಾರತ ದೇಶದಲ್ಲಿ ಹುಟ್ಟಿನಿಂದ ಸಾಯುವವರೆಗೆ ಎಲ್ಲದಕ್ಕೂ ತಮ್ಮದೇ ಆದ ಕಟ್ಟಳೆಗಳನ್ನು, ನಿಯಮಗಳನ್ನು ಹಾಕಿದ್ದಾರೆ. ಹಾಗೆಯೇ ಲೈಂಗಿಕತೆಗೂ ಒಂದು ಕಟ್ಟಳೆ ಹಾಕಿ ವಿವಾಹ ಎನ್ನುವ ನಿರ್ಬಂಧವನ್ನು ಹೇರಿದ್ದಾರೆ. ಒಂದು ಗಂಡು-ಹೆಣ್ಣಿನ ನಡುವೆ ವಿವಾಹ ಪೂರ್ವ ಹಾಗೂ ವಿವಾಹದ ಹೊರಗಡೆ ನಡೆಸುವ ಸೆಕ್ಸನ್ನು ನಮ್ಮ ದೇಶ ಒಪ್ಪುವದಿಲ್ಲ. ಆದರೆ ಬೇರೆ ರಾಷ್ಟ್ರಗಳಲ್ಲಿ ಅದೇಲ್ಲಾ ಸಿಗರೇಟು ವಿಸ್ಕಿ ಕುಡಿದಷ್ಟು ಸರಳ ವ್ಯವಹಾರವಾಗಿದೆ. ಸಂಪ್ರದಾಯ ಎನ್ನುವ ಆ ಚೌಕಟ್ಟನ್ನು ತೆಗೆದು ನೋಡಿದಾಗ ಅಲ್ಲಿ ನಡೆಯುವುದು ಅದೇ ಕ್ರೀಯೆ. ಎರಡು ಮನಸ್ಸು ಹಾಗೂ ಎರಡು ದೇಹಗಳ ಒಂದು ಗೂಡುವಿಕೆ. ಆದರೆ ನಮ್ಮ ದೇಶದ ಸಂಸ್ಕೃತಿಯಲ್ಲಿ ಯಾವೊದನ್ನು ತಾತ್ಪೂರ್ತಿಕವಾಗಿ ಕಂಡಿಲ್ಲಾ ಎಲ್ಲ ಸಂಬಂಧಗಳಿಗೂ ಶಾಸ್ವತತೆಯನ್ನು ಕೊಟ್ಟಿದೆ. ನಮ್ಮ ಪೂರ್ವಜರು ಲೈಂಗಿಕ ಕ್ರೀಯೆ ಕೇವಲ ತಾತ್ಕಾಲಿಕ ಸುಖಃ ಗೋಸ್ಕರವಾಗಿ ನಡೆದು ಮುಗಿಯುವುದಲ್ಲಾ ಎಂದು ಅರಿತು ಅದಕ್ಕೆ ಶಾಸ್ವತವಾದ ವಿವಾಹ ಎನ್ನುವ ಬೆಸುಗೆಯನ್ನು ಹಾಕಿದ್ದಾರೆ. ಸಧ್ಯ ಏಡ್ಸ ಎನ್ನುವ ಮಹಾ ಮಾರಿಗೆ ಹೆದರಿ ಇಡೀ ಜಗತ್ತು ಭಾರತೀಯ ವಿವಾಹದ ಸಂಪ್ರದಾಯವನ್ನು ಒಪ್ಪಿಕೊಂಡು ಅನುಸರಿಸುತ್ತಲಿದೆ. ಒಂದು ಗಂಡಿಗೆ ಒಂದೇ ಹೆಣ್ಣು, ಒಂದು ಹೆಣ್ಣಿಗೆ ಒಂದೇ ಗಂಡು ಎನ್ನುವ ನಿಯಮ ಪಾಲಿಸುವತ್ತ ಇಡೀ ಜಗತ್ತು ವಿಚಾರಿಸುತ್ತಿದೆ. ವಿವಾಹದ ಹೊರಗಡೆ ನಡೆಯುವ ಎಲ್ಲ ದೈಹಿಕ ಸಂಬಂಧಗಳನ್ನು ಅನೈತಿಕ ಎಂಬ ಹಣೆಪಟ್ಟಿ ಕಟ್ಟಿದ್ದಾರೆ. ಇದರಿಂದ ದೈಹಿಕ, ಮಾನಸಿಕ ನೆಮ್ಮದಿ ಹಾಳಾಗುತ್ತದೆ ಅಷ್ಟೇ ಅಲ್ಲ ಅದೇಷ್ಟೋ ಸಂಸಾರಗಳು ಹಾಳಾಗಿವೆ.
ಅಷ್ಟಕ್ಕೂ ಈ ಅನೈತಿಕ ಸಂಬಂಧಗಳು ಯಾಕೆ ಹುಟ್ಟುತ್ತವೆ ಎಂದು ವಿಚಾರಿಸಲಾಗಿ ಇಂದಿನ ಗಡಿಬಿಡಿ ಜೀವನ ಶೈಲಿಯಲ್ಲಿ ಗಂಡ ಹೆಂಡತಿ ಇಬ್ಬರು ತಮ್ಮ ಸಂಸಾರದ ನೊಗವನ್ನು ಸಮವಾಗಿ ಹಂಚಿಕೊಂಡು ಜೀವನ ನಡೆಸುತ್ತಿದ್ದಾರೆ. ಇಬ್ಬರು ತಮ್ಮ ತಮ್ಮ ಕೆಲಸಗಳಿಗೆ ಹೋಗುತ್ತಾರೆ. ಇದರಿಂದ ಒಬ್ಬರಿಗೋಬ್ಬರು ನೋಡುದಕ್ಕಾಗಿ ವಿಕೇಂಡ್ ನ ದಾರಿ ಕಾಯಬೇಕಾಗುತ್ತದೆ. ಹಾಗಾದಾಗ ಮನಸ್ಸು ಅಂತಹ ಖಾಲಿಯಾದ ಆ ಜಾಗದಲ್ಲಿ ಒಂದು ಸಹ ಹೃದಯವನ್ನು ಬಯಸುವುದು ತುಂಬಾ ಸಹಜ. ಹೀಗೆ ತಮ್ಮ ಒಡನಾಟದಲ್ಲಿ ಬರುವ ಕೋ-ವರ್ಕರ್ ಗಳೊಂದಿಗೆ ಗಂಡ ಹಾಗೂ ತಮ್ಮ ಮನೆಯ ಸುತ್ತ ಇರುವ ಹುಡುಗನೊಂದಿಗೆ ಹೆಂಡತಿ ಸಣ್ಣದೊಂದು ಗೆಳೆತನ ಪ್ರಾರಂಭಿಸುತ್ತಾರೆ. ಮುಂದೆ ಅದೇ ಒಂದು ಪ್ರೇಮವಾಗಿ ಬೆಳೆಯುತ್ತದೆ. ಇದ್ದ ಸಂಸಾರದಲ್ಲಿಯ ತಾಪತ್ರಯಗಳನ್ನು ಸರಿದೂಗಿಸಲು ಪ್ರಾರಂಭಿಸಿದ ಹೊಸ ಸಂಬಂಧ ಮುಂದೆ ಅದೇ ಒಂದು ತಾಪತ್ರಯವಾಗಿ ಪರಿಣಮಿಸುತ್ತದೆ. ಅದರಿಂದ ಹೊರಬರುವಲ್ಲಿ ಇದ್ದ ಸಂಸಾರ ಸರಿಯಾಗಿ ಉಳೀಯುತ್ತದೆ ಎನ್ನುವ ಭರವಸೆ ಸಹಿತ ಉಳಿಯುದಿಲ್ಲ. ಅದನ್ನು ಅರಿತ ನಮ್ಮ ಪೂರ್ವಜರು ಅದಕ್ಕೆ ಒಂದು ಸಂಪ್ರದಾಯವನ್ನು ಹಾಕಿದ್ದಾರೆ. ಪ್ರೀತಿ ಅದೇಷ್ಟೇ ಆಳವಾಗಿರಲಿ, ಗಾಢವಾಗಿರಲಿ, ಅದು ಸಂಪ್ರದಾಯ ಬದ್ದವಾಗಿರದಿದ್ದರೆ ಅದನ್ನು ಅನೈತಿಕತೆ ಎನ್ನುತ್ತದೆ ಸಂಫ್ರದಾಯ. ಅದಕ್ಕೆ ಹೆಂಡತಿ ಹೆಂತವಳೇ ಇರಲಿ ಗಂಡ ಹೆಂತವನೇ ಇರಲಿ ಅವರೊಂದಿಗೆ ಕಡೆತನಕ ಜೀವನ ಸಾಗಿಸುವುದು ನಮ್ಮ ಭಾರತೀಯ ಸಂಸ್ಕೃತಿ. ಕಾರಣ ಲೈಂಗಿಕತೆ ಸುರಕ್ಷಿತ ವಾಗಿದ್ದರೆ ಸಮಾಜ ಸುರಕ್ಷಿತವಾಗಿರುತ್ತದೆ.

ಅದೆನೇ ಇರಲಿ ನೈತಿಕ-ಅನೈತಿಕತೆಯ ಗೊಡವೆಯನ್ನು ಬಿಡಿ, ಕೆಲವೇ ದಿನಗಳಲ್ಲಿ ಮಳೆಗಾಲ ಪ್ರಾರಂಭವಾಗುವುದಿದೆ. ಆದಷ್ಟು ಬೇಗ ಸಾಂಪ್ರದಾಯಕವಾಗಿ ಮದುವೆಯಾಗಿ ಗಂಡ-ಹೆಂಡತಿ ಜೊತೆಯಾಗಿ ಮಳೆಗಾಲದ ಸವಿಯನ್ನು ಸವಿಯಿರಿ ಎನ್ನುತ್ತ ಮುಗಿಸುತ್ತೇನೆ.

Saturday, April 30, 2011

ನನ್ನ ಪ್ರೀತಿಯ ಹುಡುಗಿಯ ಕಣ್ಣುಗಳಿಗೆ. . .

ಪ್ರೇಮವೆಂಬುದು ಒಡೆಯಲಾರದ ಒಗಟು ಅದು ಕ್ಷಣಿಕವೋ ಅಮರವೋ ದೇವರೆ ಬಲ್ಲ.
ಹ್ಯೋಗೋ.

ಮೂಕ ವೇದನೆ.




ತಿಳಿಗೊಳದಲ್ಲಿ ಸುಳಿದ ನಕ್ಷತ್ರ ಮೀನು ನೀನು

ನೋಟ ಒಂದೇ ಕ್ಷಣ,

ಸೇಳೆದು ನಿಲ್ಲಿಸಿದೆ ಕಣ್ಣಲ್ಲಿ ಈ ಸುಡುವೆದೆಗೆ ಸಂದ

ಪ್ರೀತಿಯ ಪಾರಿಜಾತ ನೀನು, ನೋವು ನೀಗಿ ಆಗಸಕ್ಕೆ

ಹೂವು ಮೂಡಿಸಿದೆ. ಬಾಳಿನ ಕೊಳಲ ದನಿಯಲ್ಲಿ ಹರಿದ

ಪ್ರೀತಿಯ ಪಿಸು ಮಾತು ನೀನು. ಹಿಗ್ಗರಳಿ ಒಳಗೆ ಕನಸ

ಚಲ್ಲಿವೆ ಚಂದಿರನ ಬೆಳಕಲ್ಲಿ.

ನಿನ್ನೊಳಗೆ ನನ್ನ ಕಳಕೊಂಡ ಮರುಗಳಿಗೆ ನಾನು ನಾನಲ್ಲ

ನಾನು ಇದ್ದೇನಾದರೂ ಎಲ್ಲಿ ? ನಿನ್ನಲ್ಲಿ,

ಒಣಗಿದ ಈ ಒಂಟಿ ಕೊಂಬೆಯ ತುಂಬಾ

ಪ್ರೀತಿಯ ಹೂವು ಅರಳಿದವು ನಿನ್ನವು.

ಬಿ. ಎನ್. ಮಲ್ಲೇಶ.

Thursday, March 24, 2011

60+ Earth Hour 2011’ (ಒಂದು ಘಂಟೆವರೆಗೆ ಪ್ರಪಂಚದ ಶಕ್ತಿ ಬಳಕೆ ನಿಷೇದ)

ಇದೇ ತಿಂಗಳು ದಿನಾಂಕ : 26.03.2011 ರಂದು ಜಗತ್ತು ಶಕ್ತಿ ಬಳಕೆಗೆ ಪೂರಕ ಕ್ರೀಯೆಗಳನ್ನು ಸ್ವತಃ ನಿಷೇದಿಸಬೇಕಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ವಿನಂತಿಸಿದ್ದಾರೆ. ಅಂದು ಒಂದು ಘಂಟೆ ವರೆಗೆ ಯಾವುದೇ ರೀತಿಯ ಶಕ್ತಿಯ ಉಪಯೋಗವನ್ನು ಮಾಡಬಾರದು, ಅದರಲ್ಲಿ ಟಿ.ವ್ಹಿ., ಕಂಪ್ಯೂಟರ್, ಲೈಟ್, ವಿದ್ಯುತ್, ಕಾರಖಾನೆ, ವಾಹನ, ಹೋಟೇಲ್ ಉದ್ಯಮ ಅಷ್ಟೇ ಅಲ್ಲಾ ಒಟ್ಟಾರೆ ಶಕ್ತಿ ಬಳಕೆಯನ್ನೇ ನಿಷೇದಿಸಲು ವಿನಂತಿಸಿದ್ದಾರೆ. ಏಕೆಂದರೆ,

ಕಾರಣ ಮಾನವ ಜೀವಿ ಭೂಮಿಯ ಮೇಲೆ ಹುಟ್ಟಿದಾಗಿನಿಂದ ಒಂದಿಲ್ಲೊಂದು ಕ್ರೀಯೆಗಳಲ್ಲಿ ತೊಡಗಿದ್ದಾನೆ. ಪ್ರಗತಿ, ಬೆಳವಣಿಗೆ ಅನ್ನುತ್ತಾ ವಾತಾವರಣದ ವಿರುದ್ಧ ಕ್ರೀಯೆಗಳನ್ನು ಮಾಡುತ್ತಾ, ವಾತಾವರಣವನ್ನು ತನ್ನ ಕಪಿಮುಷ್ಠಿಯಲ್ಲಿ ಹಿಡಿಯುವ ಆಸೆಯಿಂದ ಪ್ರಕೃತಿಯ ನಿಯಮಗಳನ್ನು ಗಾಳಿಗೆ ತೊರಿದ್ದಾನೆ. ಪ್ರಾಣಿಯಂತೆ ಓಡಬೇಕೆಂಬ ಬಯಕೆಯಿಂದ ದ್ವಿಚಕ್ರ ಅಷ್ಟೇ, ನಾಲ್ಕು ಆರು ಎಂಟು ಗಾಲಿಗಳ ವಾಹನಗಳನ್ನು ಕಂಡು ಹಿಡಿದ, ಹಕ್ಕಿಯಂತೆ ಹಾರುವ ಆಸೆಯಿಂದ ವಿಮಾನ, ಹೆಲಿಕ್ಯಾಪ್ಟರ್, ರಾಕೇಟಗಳನ್ನು ಕಂಡು ಹಿಡಿದ, ಮೀನಿನಂತೆ ನೀರಿನ ಮೇಲೆ ಹರಿಯುವ ಆಸೆಯಿಂದ ಹಡಗುಗಳನ್ನು ಕಂಡು ಹಿಡಿದ ಆದರೆ ಮಾನವ ಮನುಷ್ಯನಾಗಲು ಬೇಕಾಗುವ ಮಾನವೀಯ ಗುಣಗಳನ್ನು ಬೆಳಸಿಕೊಳ್ಳುವುದನ್ನು ಮರೆತ. ಯಾವುದೇ ಒಂದು ವಸ್ತುವಿನ ಉಪಯೋಗ ಅಥವಾ ದುರುಪಯೋಗ ಎನ್ನುವುದು ಆ ವಸ್ತುವಿನ ಬಳಕೆ ಮಾಡುವ ಮನಸ್ಸಿನ ಮೇಲೆ ನಿಂತಿರುತ್ತದೆ. ಹಾಗೆ ಇಂದು ನಮ್ಮಿಂದ ತಯಾರಿಸಲ್ಪಟ್ಟ ವಸ್ತುಗಳಿಂದಾನೆ ನಮಗೆ ವಿನಾಶದ ಕಾಟ ಶುರುವಾಗಿದೆ. ಅದು ಪರಮಾಣು ವಿಕಿರಣಗಳಾಗಿರಬಹುದು, ವಾಹನಗಳಿಂದಾ ಹೊರಬೀಳುವ ಬೂದಿಯಿಂದ ಇರಬುಹುದು, ನೀರು, ಗಾಳಿ, ಭೂಮಿಯನ್ನು ಕಲುಷಿತಗೊಳಿಸುವಲ್ಲಿ ಎಷ್ಟು ಸಾಧ್ಯಾನೋ ಅಷ್ಟು ಪ್ರಗತಿಯನ್ನು ಸಾಧಿಸಿದ್ದೇವೆ. ಅದರಿಂದಾಗುತ್ತಿರುವ ಪರಿಣಾಮಗಳನ್ನು ನಮ್ಮ ಕಣ್ಣಾರೆ ನಾವು ನೋಡುತ್ತಿದ್ದೇವೆ. ಈಗ ಪ್ರಕೃತಿ ನಮಗೆ ಕೊಡುತ್ತಿರುವ ಪ್ರತಿಕ್ರೀಯೆ ಅದು ಸಹಜ ಅಲ್ಲವೆ. ಅದಕ್ಕಾಗಿ ಅದರಿಂದ ಪಾರಾಗುವ ಒಂದು ಯತ್ನವಾಗಿ ಡಬ್ಲೂ.ಡಬ್ಲೂ.ಎಫ್. (ವಲ್ಡ ವೈಲ್ಡಲೈಫ್ ಫೆರಡರೇಷನ್) ದವರು ಈ ಒಂದು ಅಂಶವನ್ನು ಕಂಡು ಕೊಂಡಿದ್ದಾರೆ. ಸ್ವಲ್ಪ ಸ್ವಲ್ಪವಾಗಿ ನಾವು ಈ ಶಕ್ತಿ ಪ್ರಯೋಗವನ್ನು ಹೊರತುಪಡಿಸಿ ಜೀವಿಸುವುದನ್ನು ಕಲಿಯಬೇಕು ಎಂಬುದನ್ನು ಮನನ ಮಾಡಲು ಈ ಒಂದು ಪ್ರಯತ್ನಕ್ಕೆ ಕೈ ಹಾಕಿದ್ದಾರೆ.

ಇದು ಪ್ರಾರಂಭವಾಗಿದ್ದು, ಆಸ್ಟ್ರೀಲಿಯಾದ ಸಿಡ್ನಿಯಲ್ಲಿ 2007 ರಲ್ಲಿ 2.2 ಮಿಲಿಯನ್ ದಷ್ಟು ಜನ ತಮ್ಮ ವ್ಯವಹಾರಗಳನ್ನು ಒಂದು ಗಂಟೆಗಳ ಕಾಲ ಬಂದ ಮಾಡಿದ್ದರು. ಅದು ಹಾಗೆ ಮುಂದುವರೆದು ಮುಂದಿನ ಒಂದು ವರುಷದಲ್ಲಿ 370 ನಗರಗಳಿಗೆ 37 ದೇಶಗಳಿಗೆ ಮುಂದುವರೆಯಿತು. ಅಲ್ಲದೆ ಇದಕ್ಕೆ ಜಾಗತಿಕ ಮಟ್ಟದಲ್ಲಿ ಮನ್ನಣೆ ದೊರೆಯಿತು. 2010 ರಲ್ಲಿ ಎಲ್ಲ ಜಾಗತಿಕ ದಾಖಲೆಗಳನ್ನು ಮೀರಿ ಇದು ಬೆಳೆಯಿತು 1.3 ಬಿಲಿಯನ ಜನರನ್ನು 4616 ನಗರಗಳನ್ನು 128 ದೇಶಗಳನ್ನು ತಲುಪಿದೆ.

ಸಧ್ಯ ಭಾರತದಲ್ಲಿ ಇದಕ್ಕೆ brand ambassador ಆಗಿ ವಿದ್ಯಾ ಬಾಲನ್ ಅವರು ಆಯ್ಕೆಯಾಗಿದ್ದಾರೆ. ಅವರೆ ಹೇಳುವಂತೆ ನೀವು ಒಂದು ಗಂಟೆಯವರೆಗೆ ನಿಮ್ಮ ಕಂಪ್ಯೂಟರ್ ನಲ್ಲಿ ಕೆಲಸವನ್ನು ನಿಷೇಧಿಸಿ, ಚಾಟಮಾಡುವುದನ್ನು ಬಿಡಿ, ಅಂದು ನಡೆಯುವ ಕ್ರೀಕೆಟ್ ಮ್ಯಾಚನ್ನು ನೋಡದೇ ಬರಿ ಉಹಿಸಿಕೊಳ್ಳಿ ಅದು ಒಂದು ತರಹದ ರೊಮಾಂಚನ ಅನುಭವವಾಗುವುದು ಎಂದು ಹೇಳಿದ್ದಾರೆ. ಹಾಗಾದರೆ ನೀವು ಕೂಡಾ ಒಂದು ಗಂಟೆಕಾಲ ಶಕ್ತಿ ಬಳಕೆಯನ್ನು ನಿಷೇದಿಸುತ್ತೀರಿ ತಾನೆ.