Search This Blog

Saturday, April 30, 2011

ಮೂಕ ವೇದನೆ.




ತಿಳಿಗೊಳದಲ್ಲಿ ಸುಳಿದ ನಕ್ಷತ್ರ ಮೀನು ನೀನು

ನೋಟ ಒಂದೇ ಕ್ಷಣ,

ಸೇಳೆದು ನಿಲ್ಲಿಸಿದೆ ಕಣ್ಣಲ್ಲಿ ಈ ಸುಡುವೆದೆಗೆ ಸಂದ

ಪ್ರೀತಿಯ ಪಾರಿಜಾತ ನೀನು, ನೋವು ನೀಗಿ ಆಗಸಕ್ಕೆ

ಹೂವು ಮೂಡಿಸಿದೆ. ಬಾಳಿನ ಕೊಳಲ ದನಿಯಲ್ಲಿ ಹರಿದ

ಪ್ರೀತಿಯ ಪಿಸು ಮಾತು ನೀನು. ಹಿಗ್ಗರಳಿ ಒಳಗೆ ಕನಸ

ಚಲ್ಲಿವೆ ಚಂದಿರನ ಬೆಳಕಲ್ಲಿ.

ನಿನ್ನೊಳಗೆ ನನ್ನ ಕಳಕೊಂಡ ಮರುಗಳಿಗೆ ನಾನು ನಾನಲ್ಲ

ನಾನು ಇದ್ದೇನಾದರೂ ಎಲ್ಲಿ ? ನಿನ್ನಲ್ಲಿ,

ಒಣಗಿದ ಈ ಒಂಟಿ ಕೊಂಬೆಯ ತುಂಬಾ

ಪ್ರೀತಿಯ ಹೂವು ಅರಳಿದವು ನಿನ್ನವು.

ಬಿ. ಎನ್. ಮಲ್ಲೇಶ.

No comments:

Post a Comment